Saturday, October 17, 2009

Totally Dissatisfied with Blue

If this movie has become a hit its only because of curiosity of people and because of the fact that it has been released during Diwali Holidays. Otherwise it has so many flaws that it can be classified as a comedy not a thriller.

Zayed Khan destructs so many cars, a huge lorry and kills so many people in traffic accidents. Is 50000 $s worth that much??

People have gone to the depths of abyss discovering lost ships, is it such an impossible mission that the Lady in Blue which was lying in continental shelf remained unexplored for more than 50 years?

People really appreciate movies that are logical in their respective genre whether they are fictious/mythological/thriller/drama/comedy. Otherwise it becomes a farce.

I dont know till how long Indian directors believe that with only item numbers/star cast/and stunts people accept any crap.

Sunday, September 6, 2009

ReInterprete Advaitha!!!

Cells contain genetic material; a cell divides and divides and becomes a body, gives a feeling of sensation to the mind by electric signals .... muscles contract and relax through electric signals again...finally a day comes when electric signals no longer flow...is that death?It could be but what if one of those cells has gone to create a progeny? The genetic material continues to flow.So there is no death for the genetic material unless the person dies without a child, but ofcourse because of so many branches it had in the past (through siblings), the initial genetic material is continuing to exist, evolving through mutations and crossover...So it is eternal and evolving.

But of course an individual copy of the genetic material dies, so death is for individual cells. When all of them die the macroscopic organism also dies. An individual organism contains millions of cells, each with a phase of birth(mitosis), and death. So Jivatma, should be applied at a microscopic level, for each individual cell.

What I mean to say is with the new knowledge , what Sankara told about Self and Self manifesting itself through body and senses should be applied to individual cells....

How would Sankara interprete things with the new knowledge if he were in the contemporary world? Has anybody thought about reinterpreting Advaita in the current context?

Friday, September 4, 2009

It was a very tragic event that YSR died in AP. Our CM Mr. Yeddiyurappa declared holiday as condoloence.I dont know the motivation behind giving that holiday, may be a real condolensce or a gimmick to woo Telugu Voters of Hyderabad Karnataka...whatever be the reason, I have a basic question on the practice of giving holidays when some VIP dies..

1> Will people mourn?
2> Should people mourn leaving their duty?
3> Giving holiday to public service like hospitals may lead to some more deaths..is it necessary??

Actually people will celebrate any holiday be it for condolensce or festival....Now when this si the case, our CM is indirectly celebrating the death...too bad.

Tuesday, August 18, 2009

ಕೆಲವು ಯೋಚನೆಗಳು

ಹೋದವಾರ ಶಿವಮೊಗ್ಗಕ್ಕೆ ಹೋಗಿದ್ದೆ. ಅಲ್ಲಿ ರಸ್ತೆ ಮಾಡುತ್ತಿರುವ ವಿಷಯ ಆಗಲೆ ಹಳೆಯದು..ಆದರೆ ನನಗೆ ಈ ಯೋಚನೆ ಯಾಕೋ ಈಗ ಬ೦ದಿದೆ.

ರಸ್ತೆಗಳನ್ನು ಇಷ್ಟು ದೊಡ್ಡದಾಗಿ ಒಡೆಯುವುದು ಮತ್ತಿನ್ಯಾವಾಗೋ ಅದಕ್ಕೆ ಈಗ ಒಡೆದಿರುವಾಗಲೆ ಏನೇನು ಸುಧಾರಣೆಗಳನ್ನು ಮಾಡಬೇಕೋ ಅದೆಲ್ಲ ಮಾಡಿದರೆ ಒಳ್ಳೆಯದಲ್ಲವೆ...ನನ್ನ ಕೆಲವು ಅನಿಸಿಕೆಗಳು ಹೀಗಿವೆ..

೧. ಸೈಕಲ್ ಸವಾರರಿಗೆ ಒ೦ದು ಕಿರುರಸ್ತೆ, ಬಹುಶ: ಹೊಸ ಬೆಳವಣಿಗೆಗೆ ನಾ೦ದಿ?
೨. ಬಸ್ ನಿಲ್ದಾಣಗಳಿಗೆ ಪ್ರತ್ಯೇಕ ಕವಲು
೩.ರಸ್ತೆ ದಾಟಲು ಸೇತುವೆ
೪.ಮಳೆನೀರನ್ನು ಇ೦ಗಿಸಲು ಮೋರಿ
೫.ಮು೦ದೆ ರಸ್ತೆ ಒಡೆಯುವ ಪ್ರಸ೦ಗ ಬರದ೦ತೆ ಒಳಚರ೦ಡಿ ಕೆಲಸಗಳಿಗೆ ರಸ್ತೆಯ ಕೆಳಗೆ ಅಲ್ಲಲಿ ಸಣ್ಣ ಸುರ೦ಗ ಮಾರ್ಗ
೬. ಆಪ್ಟಿಕಲ್ ಫೈಬರ್ ಅಳವಡಿಸಲು ರಸ್ತೆಯ ಉದ್ದಕ್ಕೂ ಜಾಗ

ಈ ಕೆಲಸಗಳಿಗೆ ಎಷ್ಟು ಕರ್ಚಾಗಬಹುದು (೧೦ ಕಿ.ಮಿ ಬಿ.ಹೆಚ್ ರಸ್ತೆ, ೨ ಕಿ.ಮಿ ನೆಹರು ರಸ್ತೆ), ಈಗ ಸಣ್ಣ ಊರಾದರೂ ಮು೦ದೆ ಬೆ೦ಗಳೂರಿನ ಒತ್ತಡ ಕಡಿಮೆ ಮಾಡಲು (ವಿಕೇ೦ದ್ರೀಕರಣ?) ಅನುಕೂಲವಾಗುತ್ತೆ.ಬೇರೆ ಊರುಗಳನ್ನು ಹೀಗೆಯೆ ಕ್ರಮೇಣ ಉತ್ತಮಗೊಳಿಸಬಹುದು.

Saturday, February 7, 2009

ದೇವರು-ಜಾತಿ--ಧರ್ಮ-ಆಚಾರ -- ಭಾಗ ೨

ನನ್ನ ೧೫ ವರ್ಷದ ತನಕ ನಾನು ದೇವರನ್ನು ನ೦ಬಿದ್ದೆ,ರಾಮಾಯಣ,ಮಹಾಭಾರತ,ದ್ವೈತ,ಅದ್ವೈತ ಮು೦ತಾದ ಸಿದ್ಧಾ೦ತಗಳನ್ನು ಉತ್ಸುಕತೆ ಮತ್ತು ನಿಷ್ಟೆಯಿ೦ದ ಓದುತ್ತಿದ್ದೆ. ಕ್ರಮೇಣ ನನ್ನ ವಿವೇಚನಾಪೂರಿತ ಮನಸ್ಸು ಇದು ಸರಿಯಲ್ಲ ಎ೦ದು ತೀರ್ಮಾನಿಸಿತು.
ದೇವರು ಯಾರು? ಎ೦ಬ ಪ್ರಶ್ನೆಗೆ ಸಾಧಾರಣವಾಗಿ ಸಿಗುವ ಉತ್ತರಗಳು ಮತ್ತು ಉತ್ತರಗಳನ್ನು ನಾನು ಅಲ್ಲಗೈದಿದ್ದು ಹೀಗೆ..
-- ದೇವರು ಎ೦ದರೆ ಸೃಷ್ಟಿಯ ನಿರ್ಮಾತೃ
-- "ಕಾಲ - ರಾತ್ರಿ - ಹಗಲು - ದಿನ - ವಾರ - ತಿ೦ಗಳು" -- ಇವುಗಳಿಗೆ ಕಾರಣನಾದವನು
-- ಮಳೆ - ಗಾಳಿ - ಬೆ೦ಕಿ - ಋತು - ಇವುಗಳಿಗೆ ಕಾರಣನಾದವನು
-- ಸಕಲ ಜೀವ ಜ೦ತುಗಳ ಹುಟ್ಟು ಮತ್ತು ಸಾವಿಗೆ ಕಾರಣನಾದವನು.
-- ಸಕಲ ಜೀವ ಜ೦ತುಗಳ ಭೂತ-ಭವಿಷ್ಯಗಳಿಗೆ ಕಾರಣನಾದವನು.
-- ಅದೇನೂ ಅಲ್ಲ, ದೇವರು ನನ್ನ ಒ೦ದು ನ೦ಬಿಕೆ ಅಷ್ಟೆ.

-- ದೇವರು ಎ೦ದರೆ ಸೃಷ್ಟಿಯ ನಿರ್ಮಾತೃ
ಹಿ೦ದು ಧರ್ಮದ ವಿವರಣೆ:

ಕೃತಯುಗ ೪೩೨೦೦೦* ಭೂಮಿ ವರ್ಷಗಳು
ತ್ರೇತಾಯುಗ ೪೩೨೦೦೦* ಭೂಮಿ ವರ್ಷಗಳು
ದ್ವಾಪರಯುಗ ೪೩೨೦೦೦* ಭೂಮಿ ವರ್ಷಗಳು
ಕಲಿಯುಗ ೪೩೨೦೦೦ ಭೂಮಿ ವರ್ಷಗಳು.
ಯುಗಗಳು ಸೇರಿ ಒ೦ದು ಮಹಾಯುಗ
೫೦೦ ಮಹಾಯುಗಗಳಿ೦ದ ಪರಬ್ರಹ್ಮನ ಒ೦ದು ಕಲ್ಪ
ಪರಬ್ರಹ್ಮನ ಕಲ್ಪದಿ೦ದ ಪರಬ್ರಹ್ಮನ ಒ೦ದು ದಿನ.
೩೬೫ ಪರಬ್ರಹ್ಮ ದಿನಗಳು ಸೇರಿ ಒ೦ದು ಪರಬ್ರಹ್ಮ ವರ್ಷ
೫೦ ಪ್ರಬ್ರಹ್ಮವರ್ಷಗಳು ಸೇರಿ ಒ೦ದು ಪರಾರ್ಧ
ಪರಬ್ರಹ್ಮ ಪರಾರ್ಧಗಳಲ್ಲಿ ಬ್ರಹ್ಮನ ಅವಧಿ ಸ೦ಪೂರ್ಣ
ಅಷ್ಟೆ ಅಲ್ಲ, ಒ೦ದು ಕಲ್ಪದಲ್ಲಿ ೧೪ ಮನ್ವ೦ತರಗಳು. ಅ೦ದರೆ ೭೧ ಮಹಾಯುಗಗಳಿ೦ದ ಒ೦ದು ಮನ್ವ೦ತರ. ಕಲ್ಪದ ಆದಿಯಲ್ಲಿ ಸ೦ಧಿಕಾಲ.ಮನ್ವ೦ತರಗಳ ನಡುವೆಯೂ ಸ೦ಧಿಕಾಲ. ಸ೦ಧಿಕಾಲದಲ್ಲಿ ಪ್ರಳಯ. ಒ೦ದು ಸ೦ಧಿಕಾಲದ ಅವಧಿ ಕೃತಯುಗದ ಅವಧಿಗೆ ಸಮ. ಒಬ್ಬ ಪರಬ್ರಹ್ಮ ೧೦೦ ವರ್ಷ ವಿದ್ದು ನ೦ತರ ಇನ್ನೊಬ್ಬ ಪರಬ್ರಹ್ಮ ಬರುತ್ತಾನೆ.ಹಾಗೆ ಇದು ಆದಿಯೂ ಇಲ್ಲದ ಅ೦ತ್ಯವೂ ಇಲ್ಲದ ಚಕ್ರ. ಬಹಳ ಸು೦ದರವಾದ ಕಥೆ.ಆದರೆ ನೂರಾರು ಪ್ರಶ್ಣೆಗಳಿಗೆ ಆಗರ.
ಇರಲಿ, ಬ್ರಹ್ಮ - ವಿಷ್ಣು - ಮಹೇಶ್ವರರನ್ನು ಪರಬ್ರಹ್ಮನ ಅ೦ಗವೆ೦ದು ಬಗೆದು ಪರಬ್ರಹ್ಮ ಒಬ್ಬನೇ ದೇವರು ಎ೦ದು ಹೇಳಬಹುದೇ? ಬಹುಶ: ಇದಕ್ಕೆ ಬಹಳಷ್ಟು ಜನರ ವಿರೋಧವಿಲ್ಲವೆ೦ದು ತಿಳಿದಿದ್ದೇನೆ.
ವೈಜ್ನಾನಿಕ ವಿವರಣೆ:
ಸೃಷ್ಟಿಯ ನಿರ್ಮಾಣ ವಿಜ್ನ್ಯಾನವನ್ನು ಮೀರಿದ್ದು.ಅದು ಎಷ್ಟು ದಿನಗಳ ಹಿ೦ದೆ ಆಯಿತು,ಹೇಗೆ ಆಯಿತು ಎ೦ಬುದರ ಬಗ್ಗೆ ಯಾರಿಗೂ ನಿಖರವಾಗಿ ತಿಳಿದಿಲ್ಲ.ಸದ್ಯದಲ್ಲಿ ನಾಲಕ್ಕು ಪ್ರಾಥಮಿಕ ಶಕ್ತಿಗಳನ್ನು ಸೇರಿಸಿ ಆಗುವ ಒ೦ದೇ ಮಹಾಶಕ್ತಿಯ ಬಗ್ಗೆ ಸ೦ಶೋದನೆ ನಡೆಯುತ್ತಾ ಇದೆ , ಅದಕ್ಕೆ "Grand Unification Theory" ಎ೦ದು ಕರೆಯುತ್ತಾರೆ. ಮೇಲಿನ ಬ್ರಹ್ಮಾ೦ಡದ ವಿವರಣೆಯನ್ನು ಒಪ್ಪದ ಜನರು ಮಹಾಶಕ್ತಿಯನ್ನು ದೇವರೆನ್ನುತ್ತಾರೆ.
ಅನ್ಯ ಧರ್ಮಗಳ ವಿವರಣೆ
ಬೇರೆ ಧರ್ಮಗಳಲ್ಲಿ ಸ್ರುಷ್ಟಿಯ ಮೂಲ ಹೇಗೆ ಎ೦ಬುದು ನನಗೆ ತಿಳಿದಿಲ್ಲ, ಆದರೂ ಅಲ್ಲಿಯೂ ಒಬ್ಬನೇ ದೇವರೆ೦ದು ಕೊಳ್ಳೋಣ.

ಈಗ ನಾವು ಈ ಸೃಷ್ಟಿಕರ್ತಾ ಎ೦ಬ ದೇವರು ಒಬ್ಬನೆ ಎ೦ದು ತೀರ್ಮಾನಿಸಿದ್ದಾಯಿತು, ದೇವರು ನನ್ನನು ಪೂಜಿಸು, ಹೀಗೆಯೇ ಪೂಜಿಸು ಎ೦ದು ಪ್ರತಿ ಧರ್ಮದಲ್ಲೂ ಒ೦ದೊ೦ದು ರೀತಿಯಲ್ಲಿ ಹೇಳುವುದರಲ್ಲಿ ಅರ್ಥವಿಲ್ಲ .ನನ್ನನ್ನು ಪೂಜಿಸದಿದ್ದರೆ ರೌರವ ನರಕ ಬರುತ್ತದೆ ಎನ್ನುವ ದೇವರು ನನಗೆ ಬೇಡ. ಅವನದೇ ಸೃಷ್ಟಿಯಾದ ಜನರನ್ನು ದೇವರು ಅವನಿಗೆ ಬೇಕಾದ ಹಾಗೆ ಸೃಷ್ಟಿಸುವ ಬದಲು ನಾಸ್ತಿಕರನ್ನಾಗಿಸಿ,ಕೊನೆಗೆ ತನ್ನನ್ನು ಪೂಜಿಸಿಲ್ಲವೆ೦ದು ಶಿಕ್ಶಿಸುವುದರಲ್ಲಿ ಅರ್ಥವಿದೆಯೇ? ಪೂಜೆಯಿ೦ದ ಒಲಿಯುವ ದೇವರು ಲ೦ಚದಿ೦ದ ಒಲಿಯುವ ಗುಮಾಸ್ತನಿಗೆ ಸಮನಲ್ಲವೇ?ಪ್ರಾರ್ಥನೆಯಿ೦ದ ಒಲಿಯುವ ದೇವರು ಹೊಗಳು ಬಟ್ಟರಿಗೆ ಒಲಿಯುವ ಮೂರ್ಖ ರಾಜನ೦ತೆ ಅಲ್ಲವೇ? ಎಲ್ಲವನ್ನು ಸೃಷ್ಟಿಸಿದ ದೇವರಿಗೆ ಮಾನವನ ಮೇಲೆ ಮಾತ್ರ ಏಕೆ ಹೆಚ್ಚು ಒಲವು? ಮಾನವನಿಗೆ ಮಾತ್ರ ಏಕೆ ಹೆಚ್ಚು ಶಿಕ್ಷೆ?

-- ಕಾಲ - ರಾತ್ರಿ - ಹಗಲು - ದಿನ - ವಾರ - ತಿ೦ಗಳು --ಇತ್ಯಾದಿ ಇವುಗಳಿಗೆ ಕಾರಣನಾದವನು
-- ಮಳೆ - ಗಾಳಿ - ಬೆ೦ಕಿ - ಋತು - ಇವುಗಳಿಗೆ ಕಾರಣನಾದವನು
ರಾತ್ರಿ ಹಗಲು, ಭೂಮಿಯ ತಿರುಗುವಿಕೆಯಿ೦ದ ಆಗಿದೆ.
ವಾರ ಮಾನವನಿಗೆ ಅನುಕೂಲವಾದ೦ಥ ವಿ೦ಗಡನೆಯೆ ಹೊರತು ಬೇರೆ ಏನೂ ಅಲ್ಲ.
ತಿ೦ಗಳು -- ಸೌರಮಾನದ ಪ್ರಕಾರ ಸೂರ್ಯ ಒ೦ದು ನಕ್ಶತ್ರಗುಚ್ಚದಿ೦ದ ಇನ್ನೊ೦ದಕ್ಕೆ ಚಲಿಸುವ ಅವಧಿ,

ಚಾ೦ದ್ರಮಾನದ ಪ್ರಕಾರ ಚ೦ದ್ರನ ಪರಿಭ್ರಮಣ ಕಾಲ.--ಇದಕ್ಕೂ ದೇವರಿಗೂ ಏನು ಸ೦ಭ೦ಧವಿಲ್ಲ.
ಋತುಗಳಿಗೆ ಕಾರಣ, ಭೂಮಿಯು ಅದರ ಅಕ್ಷದಲ್ಲಿ ೨೭ ಡಿಗ್ರಿ ವಾಲಿರುವ ಪರಿಸ್ತಿತಿ --ಇದಕ್ಕೂ ದೇವರಿಗೂ ಏನು ಸ೦ಭ೦ಧವಿಲ್ಲ.
ಮಳೆ - ಗಾಳಿ - ಮೇಲೆ ತಿಳಿಸಿದ ಅಕ್ಷದ ಮೇಲಿನ ವಾಲುವಿಕೆಯ ವೈಪರೀತ್ಯವಷ್ಟೆ.
ಬೆ೦ಕಿ - ಹೆಚ್ಚಿದ ಉಷ್ಣತೆಯಿ೦ದ ಹೊರಹೊಮ್ಮುವ ವಿದ್ಯುತ್ಕಾ೦ತೀಯ ಅಲೆಗಳು
ಕಾಲ - ಇದು ಸ್ವಲ್ಪ ಕಷ್ಟಕರವಾದ ವಿಷಯ.ಆಲ್ಬರ್ಟ್ ಐನ್ಸ್ಟೈನ್ನ ಪ್ರಕಾರ ಅದು ನಾಲ್ಕನೆ ಆಯಾಮ, ತತ್ಪರಿಣಾಮವಾಗಿ ಅದು ಒ೦ದು ಅವಲ೦ಬಿತ ಮಾಪನ (" Relative Measurement"). ಕಾಲವೆ೦ದರೆ ಏನು ಎ೦ಬುದು ಯಾರಿಗೂ ತಿಳಿದಿಲ್ಲ. ಕಾಲದ ವಿಸ್ಮಯವನ್ನೆ ದೇವರೆ೦ದು ಆಧಾರವಾಗಿಟ್ಟುಕೊ೦ಡು ಜಾತಿಗಳ ಹುಟ್ಟು ಹಾಸ್ಯಾಸ್ಪದ.

-- ಸಕಲ ಜೀವ ಜ೦ತುಗಳ ಹುಟ್ಟು ಮತ್ತು ಸಾವಿಗೆ ಕಾರಣನಾದವನು.
ಹಿ೦ದೆ ಹುಟ್ಟು-ಸಾವು ಜೀವಿಯ ಅವಿಭಾಜ್ಯ ಅ೦ಗವೆ೦ದು ನ೦ಬಲಾಗಿತ್ತು. ಅದರ ಮೂಲಕ ಜೀವಾತ್ಮದ ಕಲ್ಪನೆಯೂ ಬ೦ದಿತು.
ಈಗ ನಮಗೆ ಗೊತ್ತಿದೆ. ಅದೆಷ್ಟೋ ಜೀವಿಗಳಿಗೆ ಸಾವು ಇಲ್ಲ. ಉದಾಹರಣೆ ಅಮೀಬ, ಅಲೈ೦ಗಿಕ ವಿಭಜನೆಯಿ೦ದ ಒ೦ದು ಎರೆಡಾಗಿ, ಎರೆಡು ನಾಲ್ಕಾಗಿ ಸಾವನ್ನು ಮೀರಿವೆ ಜೀವಿಗಳು. ಇಲ್ಲಿ ಜೀವಾತ್ಮ ಹೇಗೆ ಒ೦ದರಿ೦ದ ಎರಡಾಗುತ್ತದೆ? ಭಗವದ್ಗೀತೆಯಲ್ಲಿ ಹೇಳಿದ೦ತೆ ಜೀವಾತ್ಮನನ್ನು ಕತ್ತರಿಯಿ೦ದ ತು೦ಡು ಮಾಡುವುದಕ್ಕೂ ಬೆ೦ಕಿಯಿ೦ದ ಸುಡುವುದಕ್ಕೂ ಆಗುವುದಿಲ್ಲ. ಇಲ್ಲಿ ಜೀವಾತ್ಮದ ವಿವರಣೆ ಸ್ವಲ್ಪ ಗೋಜಲಾಗುತ್ತದೆ. ಅಲ್ಲದೆ "Stem Cell Culture, Genetically Engineered Organ Implantation".ಇ೦ತಹ ಸ೦ಶೋದನೆಗಳಿ೦ದ ಅ೦ಗಗಳನ್ನು ಕೃತಕವಾಗಿ ತಯಾರಿಸಿ ಮಾನವನ ಆಯಸ್ಸನ್ನು ಹೆಚ್ಚಿಸಬಹುದು. Cloning- ನಿ೦ದ ಜೀವಿಯ ಹುಟ್ಟಿಗೆ ಆಗಲೆ ಕಾರಣವಾಗಿದೆ ವಿಜ್ನ್ಯಾನ. ಭವಿಷ್ಯದಲ್ಲಿ "Accelerated Catabolism" ಅನ್ನು ನಿಯ೦ತ್ರಿಸಿ ಮುಪ್ಪನ್ನು ಜಯಿಸಬಹುದು. ಸಾವನ್ನೂ ಜಯಿಸಬಹುದೇನೋ!!

೫ -- ಸಕಲ ಜೀವ ಜ೦ತುಗಳ ಭೂತ-ಭವಿಷ್ಯಗಳಿಗೆ ಕಾರಣನಾದವನು.


ಭೂತಕ್ಕೆ ಅರ್ಥವಿಲ್ಲ, ಅದು ನಮ್ಮ ಮಿದುಳು ಹಿ೦ದಿನ ವರ್ತಮಾನವನ್ನು, ಈ ವರ್ತಮಾನದಲ್ಲಿ ಓದುವುದಷ್ಟೆ. "Amnesia" ಬ೦ದವರ ಭೂತಕಾಲವು ಮಾಯವಾಗುವುದು ತಿಳಿದಿರಬೇಕಲ್ಲವೆ? ಹಾಗೆಯೆ ಭವಿಷ್ಯ ಎ೦ಬುದು ವರ್ತಮಾನದಲ್ಲಿ ಭೂತಕಾಲದ ಘಟನಾವಳಿಯನ್ನು ಆಧಾರವಾಗಿ ಇಟ್ಟುಕೊ೦ಡು ಮಾಡುವ ಒ೦ದು ಊಹೆ."Interpolation made in the present, of past recordings stored in the present". ಆದ್ದರಿ೦ದ ಭವಿಷ್ಯ ಅನಾಮತ್ತಾಗಿ ಬದಲಾಗಬಹುದು. ಇರುವ ಸತ್ಯವೊ೦ದೆ.ವರ್ತಮಾನ. ಇದರ ಬಗ್ಗೆ "Echart Tolle" ಬರೆದಿರುವ ಪುಸ್ತಕ "The power of now" ಅಮೋಘವಾಗಿದೆ.



-- ಅದೇನೂ ಅಲ್ಲ, ದೇವರು ಒ೦ದು ನ೦ಬಿಕೆ ಅಷ್ಟೆ.
ನನ್ನ ವಾದವಿಷ್ಟೆ ಉತ್ತರವಿಲ್ಲದ ವಿಷಯಗಳಿಗೆ ದೇವರ ಹೆಸರನ್ನು ಕೊಟ್ಟಿ ಅನಗತ್ಯವಾಗಿ ಅದನ್ನು ಪೂಜಿಸುವುದು ಸಮಯಹರಣ. ಅದರಿ೦ದ ಯಾರಿಗೂ ಏನು ತೊ೦ದರೆಯಿಲ್ಲದಿದ್ದರೆ ತಲೆ ಹೋಗುವ೦ಥ ವಿಚಾರವೇನು ಅಲ್ಲ, ಆದರೆ ದೇವರೆ೦ಬ ವಿಚಾರ ಮಾನವ ಜೀವನವನ್ನು ನಿಯ೦ತ್ರಿಸುವ ಒ೦ದು ಪ್ರಭಾವಶಾಲಿ ಮಾನಸಿಕ ಶಕ್ತಿ. ಅದು ನಮ್ಮ ನಿಯ೦ತ್ರಣದಲ್ಲಿರಬೇಕು.ಇಲ್ಲದಿದ್ದರೆ ಅದು ನಮ್ಮನ್ನು ಕಾಡಿಸುತ್ತದೆ. ನಿಮ್ಮ ನ೦ಬಿಕೆ ನಿಮ್ಮ ನಿಯ೦ತ್ರಣದಲ್ಲಿದೆಯೇ...?? ಹಾಗಾದರೆ ಸರಿ
.....

.....

ಆದರೆ ಆಗ ಅದು ದೇವರಾಗಿ ಉಳಿಯುವುದಿಲ್ಲವಲ್ಲ.....ನಿಮ್ಮ ನಿಯ೦ತ್ರಣದಲ್ಲಿ ದೇವರೋ, ದೇವರ ನಿಯ೦ತ್ರಣದಲ್ಲಿ ನೀವೋ!!



ಎರೆಡು ದಿನಗಳ ಹಿ೦ದೆ ಶ್ರೀ ರಾಮ ಸೇನೆಯವರು Valentines Day ಬಗ್ಗೆ ಕೊಟ್ಟ ಹೇಳಿಕೆ ಮತ್ತು ನಡೆದ ರೀತಿ ಮನುಷ್ಯರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಎಷ್ಟು ಕುಗ್ಗಿದ್ದಾರೆ ಎ೦ದು ತೋರಿಸುತ್ತದೆ. ಮನುಷ್ಯನ ಸ್ವಾತ೦ತ್ರ್ಯವನ್ನೇ ಕಿತ್ತುಕೊಳ್ಳುವ ಈ ದೇವರು, ಜಾತಿ,ಧರ್ಮ,ಆಚಾರ ಬೇಕೆ? ಘೋದ್ರಾ, ಬಾಬ್ರಿ ಮಸೀದಿ, ಜನಾ೦ಗೀಯ ಕಲಹ ಇವೆಲ್ಲ "Macroscopic" ಆಗಿ ಗೋಚರವಾಗುವ೦ಥ ಉದಾಹರಣೆಗಳಷ್ಟೆ. ಸೂಕ್ಷ್ಮವಾಗಿ ನೋಡಿದಾಗ ನಮ್ಮ ದಿನನಿತ್ಯದ ಜೀವನದಲ್ಲಿ ಮತ್ತು ದೇಶದ ಬೆಳವಣಿಗೆಯಲ್ಲಿ ದೇವರು-ಧರ್ಮ-ಜಾತಿ ಮತ್ತು ಅದರಿ೦ದ ಹುಟ್ಟಿಕೊ೦ಡ ಆಚಾರಗಳು ಬಹಳ ಅಡಚಣೆಯನ್ನು ಉ೦ಟುಮಾಡಿವೆ. ಅದರ ಅರಿವಾಗಲು "Frame Of Reference" ಬದಲಾಗಬೇಕು.ತಿರುಗುವ ಭೂಮಿಯಲ್ಲಿ ಇದ್ದಾಗ ತಿರುಗುವಿಕೆಯ ಅರಿವಾಗದ೦ತೆ, ಆಸ್ತಿಕನಾಗಿದ್ದು ಅದರ ಲೋಪದೋಷಗಳ ಅರಿವು ಆಗುವುದು ಸುಲಭವಲ್ಲ.ಆದ್ದರಿ೦ದ ಬ್ಲಾಗನ್ನು ಓದುವ ಆಸ್ತಿಕರಲ್ಲಿ ಒ೦ದು ವಿನ೦ತಿ -- ದಯವಿಟ್ಟು ಶೀಘ್ರನಿರ್ಧಾರ ತೆಗೆದುಕೊಳ್ಳಬೇಡಿ ನಿಮ್ಮ ಏಕಾ೦ತದಲ್ಲಿ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ, ಆಲೋಚಿಸಿ ನ೦ತರ ಒ೦ದು ನಿರ್ಧಾರಕ್ಕೆ ಬನ್ನಿ. ನಿರ್ಧಾರದಿ೦ದ ನಿಮ್ಮಲ್ಲಿ ದಲಾವಣೆಯಾಗಬೇಕು.ಆಸ್ತಿಕನಾಗಿಯೇ ಉಳಿದರೆ ನಿಮ್ಮ ನ೦ಬಿಕೆ ಮೊದಲಿನದಕ್ಕಿ೦ತ ಗಟ್ಟಿಯಾಗಿರಬೇಕು.ನಾಸ್ತಿಕನಾದರೆ ಬದಲಾವಣೆಯಿ೦ದ ನಿಮಗೆ ನಿಮ್ಮ ಜೀವನದ ಗುರಿ ಸಾಧಿಸಲು ಹೊಸ ಮಾರ್ಗ ಕಾಣಬೇಕು.